Friday 21 November 2014


ಸಹಾಯ ಹಸ್ತ-14/11/2014

                                                




                ತಾ : 14/11/12014 ರ ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಸರಕಾರಿ ಕಿರಿಯ
ಪ್ರಾಥಮಿಕ ಶಾಲೆ ಮುಳಿಂಜದಲ್ಲಿ ಲಯನ್ಸ್ ಕ್ಲಬ್ ನ ಸಹಾಯ ನಿಧಿ ವಿತರಣಾ ಸಮಾರಂಭವು ನಡೆಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ ಪ್ರೆಸಿಡೆಂಟ್ ಚಂದ್ರಹಾಸ ಆಳ್ವ ವಹಿಸಿಕೊಂಡಿದ್ದು ಎ೦.ಪಿ.ಟಿ.ಎ ಪ್ರೆಸಿಡೆಂಟ್ ಇಂದಿರಾಕ್ಷಿಯವರು ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ನ ಪ್ರೆಸಿಡೆಂಟ್ ರಾಧಾಕೃಷ್ಣ ರೈ ಶಾಲಾ ಮಕ್ಕಳ ಕಲಿಕೆಗಾಗಿ 5000/- ರೂಪಾಯಿಯನ್ನು ಪ್ರಭಾರ ಮುಖ್ಯೋಪಾಧ್ಯಾಯಿನಿ ರೇಣುಕಾ ಟೀಚರಿಗೆ ಹಸ್ತಾಂತರಿಸಿದರು.Zonal Chairperson ಲಕ್ಷ್ಮಣ ಕುಂಬಳೆ ಮಕ್ಕಳಿಗೆ ಸಿಹಿ ತಿಂಡಿಗಳನ್ನು ವಿತರಿಸಿ ಕ್ಲಬ್ ನ ಉದ್ದೇಶ,ಸಾಧನೆಗಳನ್ನು ವಿವರಿಸಿ ಮಕ್ಕಳಿಗೆ ಶುಭ ಹಾರೈಸಿದರು. ಕ್ಲಬ್ ನ ಇತರ ಭಾರವಾಹಿಗಳು ಭಾಗವಹಿಸಿದ್ದರು.ಕೊನೆಗೆ ರೇಣುಕಾ ಟೀಚರ್ ಲಯನ್ಸ ಕ್ಲಬ್ ನ ಕೊಡುಗೆಗೆ ಧನ್ಯವಾದವಿತ್ತರು.

Wednesday 19 November 2014

ಸಾಕ್ಷರ ಸಾಹಿತ್ಯ ಸಮಾಜ

                                  ಸಾಕ್ಷರ ಸಾಹಿತ್ಯ ಸಮಾಜ- 14/11/2014











ತಾಃ14/11/2014 ರ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಸಾಕ್ಷರ ಮಕ್ಕಳಿಂದ ಸಾಹಿತ್ಯ ಸಮಾಜ ಕಾರ್ಯಕ್ರಮ ಪ್ರಾರಂಭವಾಯಿತು.

ರಕ್ಷಕರ ಸಮ್ಮೇಳನಃ14/11/2014

 
ರಕ್ಷಕರ ಸಮ್ಮೇಳನಃ14/11/2014








  ಮಕ್ಕಳ ಹೆತ್ತವರ ಬಾಂದವ್ಯ ಹೆಚ್ಚಿಸಲು ಬೇಕಾದ ತಿಳುವಳಿಕಾ ಶಿಬಿರವು 14/11/2014 ರಂದು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಪ್ರಾರಂಭವಾಯಿತು.

ಮಕ್ಕಳ ದಿನಾಚರಣೆ


 
ಮಕ್ಕಳ ದಿನಾಚರಣೆ-13/11/2014









            ತಾಃ14/11/2014 ಮಕ್ಕಳ ದಿನಾಚರಣೆ ಪ್ರಯುಕ್ತ 13/11/2014 ಗುರುವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ III ಮತ್ತು IV ನೇ ತರಗತಿ ಮಕ್ಕಳಿಗೆ ಭಾಷಣ ಸ್ಪರ್ಧೆ ನಡೆಸಲಾ ಯಿತು.

ಪಿ.ಟಿ.ಎ ಸಭೆ


 
ಪಿ.ಟಿ.ಎ ಸಭೆ-5/11/2014






ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜದಲ್ಲಿ 5/11/2014 ರಂದು ಮಧ್ಯಾಹ್ನ 3.೦೦ ಗಂಟೆಗೆ ಶಾಲಾ ಮಕ್ಕಳ ಸಮವಸ್ತ್ರ ಬದಲಾವಣೆ ಮಾಡುವುದರ ಬಗ್ಗೆ ಚರ್ಚೆ ಮಾಡುವುದಕ್ಕಾಗಿ ಸಭೆ ನಡೆಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ ಪ್ರೆಸಿಡೆಂಟ್ ಚಂದ್ರಹಾಸ ವಹಿಸಿದರು.ಈ ಸಭೆಯಲ್ಲಿ ಎ೦.ಪಿ.ಟಿ.ಎ ಪ್ರೆಸಿಡೆಂಟ್ ಇಂದಿರಾಕ್ಷಿ ಉಪಸ್ಥಿತರಿದ್ದರು. ರೇಣುಕಾ ಟೀಚರ್(H.M.INCHRGE) ಎಲ್ಲರನ್ನು ಸ್ವಾಗತಿಸಿ ಸಮವಸ್ತ್ರ ಬದಲಾವಣೆ ವಿಷಯ ಮಂಡಿಸಿ ಸಮವಸ್ತ್ರ ದ ಬಟ್ಟೆಯ ಸಂಗ್ರಹಗಳ ಪುಸ್ತಕ ನೀಡಿ ,ಅದರಿಂದ ಒಂದನ್ನು ಆಯ್ಕೆ ಮಾಡಿದರು.ಕೊನೆಗೆ ಇಸಾಕ್ ಸರ್ ಧನ್ಯವಾದವನ್ನಿತ್ತರು.