Activity calender
Breaking News
Thursday 4 February 2016
ಮೆಟ್ರಿಕ್ ಶಿಬಿರ -3/2/2016
ಮೆಟ್ರಿಕ್ ಶಿಬಿರ - 3/2/2016
ಗಣಿತ ಮಕ್ಕಳಿಗೆ ಕಬ್ಬಿಣದ ಕಡಲೆಕಾಯಿ ಎ೦ಬುದು ಎಲ್ಲರ ಮನಸ್ಸಿನ ಭಾವನೆ. ಎಲ್ಲರಿಗೂ ಇತರ ವಿಷಯಕ್ಕಿಂತಲೂ ಗಣಿತ ಕಷ್ಟವೇ ಅನಿಸುತ್ತದೆ. ನಿಜವಾದ ಗಣಿತವೆಂಬುದಕ್ಕೆ ಸ್ಪಷ್ಟ,ನಿತ್ಯ,ಸತ್ಯ ಒಂದೇ ಉತ್ತರ. ಇದು ಸುಲಭ ನಮಗೆ ಬೇಕಾಗಿರುವುದು ಮನಸ್ಸು, ಪ್ರಯತ್ನ ಮಾತ್ರ. ಆದುದರಿಂದ ಗಣಿತ ವಿಷಯಗಳನ್ನು ಪ್ರಾಯೋಗಿಕವಾಗಿ ಬಳಸುವ ರೀತಿ ಕಲಿಯಬೇಕೆಂಬ ದೃಷ್ಟಿಯಿಂದ ಮೆಟ್ರಿಕ್ ಕಾರ್ಯಗಾರ ನಡೆದಿತ್ತು.
ಇದರ ಶಿಬಿರ ತಾಃ 3/2/2016 ರಂದು ಮಂಗಳವಾರ ನಮ್ಮ ಶಾಲೆಯಲ್ಲಿ ನಡೆಯಿತು.ಮಕ್ಕಳು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷರಾದ ಸುಜಾತ ಶೆಟ್ಟಿ ಯವರು, ಬಿ.ಆರ್.ಸಿ ಯ ಬಿ.ಪಿ.ಒ ರಾದ ವಿಜಯಕುಮಾರ್ ಸರ್, ಪಿ.ಟಿ.ಎ ಪ್ರೆಸಿಡೆಂಟಾದ ಚಂದ್ರಹಾಸ ಆಳ್ವ ರವರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ರವೀಂದ್ರ ಮಾಸ್ಟರ್ ಎಲ್ಲರನ್ನು ಸ್ವಾಗತಿಸಿದರು. ಮಂಗಲ್ಪಾಡಿ ಪಂಚಾಯತ್ ವಾರ್ಡ್ ಮೆಂಬರ್ ಸುಜಾತ ಶೆಟ್ಟಿ ಯವರು ಮಕ್ಕಳಿಗೆ ಗಣಿತದ ಬಗ್ಗೆ ತಿಳಿಯಪಡಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಬಿ.ಪಿ.ಒ ರಾದ ವಿಜಯಕುಮಾರ್ ಸರ್ ಮಕ್ಕಳಿಗೆ ಗಣಿತದ ತುಂಬಾ ವಿಷಯಗಳನ್ನು ತಿಳಿಸಿದರು. ಅಲ್ಲದೆ ಮಕ್ಕಳಿಗೆ ಶುಭವನ್ನು ಕೋರಿದರು. ನಂತರ ಪಿ.ಟಿ.ಎ ಪ್ರೆಸಿಡೆಂಟಾದ ಚಂದ್ರಹಾಸ ಆಳ್ವ ರವರು ಈ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಈ ಸಭೆಗೆ ಸುರೇಶ್ ಮಾಸ್ಟರ್ ಧನ್ಯವಾದವನ್ನರ್ಪಿಸಿದರು. ನಂತರ ಮಕ್ಕಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನವನ್ನು ನೋಡಿ ಸಂತೋಷ ವ್ಯಕ್ತ ಪಡಿಸಿದರು. ಅಲ್ಲದೆ ಬಿ.ಪಿ.ಒ ರಾದ ವಿಜಯಕುಮಾರ್ ಸರ್ ಮಕ್ಕಳಲ್ಲಿ ಭಾರದ, ಲೀಟರ್ ಸಮಯದ ಕುರಿತಾಗಿ ಕೆಲವು ಪ್ರಶ್ನೆಗಳನ್ನು ಕೇಳಿದರು.
ಮಂಗಲ್ಪಾಡಿ
ಪಂಚಾಯತ್ ಅಧ್ಯಕ್ಷರಾದ ಸುಜಾತ ಶೆಟ್ಟಿ
ಯವರು ಮಕ್ಕಳಲ್ಲಿ
ಹಲವು ಪ್ರಶ್ನೆಗಳನ್ನು ಕೇಳಿದರು. ಮಕ್ಕಳ
ಹೆತ್ತವರ ಮೆಟ್ರಿಕ್
ಶಿಬಿರ ಚರ್ಚೆ
ಯೊಂದಿಗೆ ಕಾರ್ಯಕ್ರಮ
ಮುಕ್ತಾಯಗೊಂಡಿತು.
Subscribe to:
Posts (Atom)