ಸ್ವಾತಂತ್ರ್ಯ
ದಿನಾಚರಣೆಃ 15/08/2015
ತಾಃ15/08/2015
ರಂದು ಬೆಳಿಗ್ಗೆ
10 ಗಂಟೆಗೆ
ಸರಿಯಾಗಿ ಸ್ವಾತಂತ್ರ್ಯ ದಿನಾಚರಣೆ
ಕಾರ್ಯಕ್ರಮ ಬಹಳ ಅದ್ದೂರಿಯಿಂದ
ನಡೆದಿತ್ತು.ಮಂಗಲ್ಪಾಡಿ
ಗ್ರಾಮ ಪಂಚಾಯತ್ ಉಪಾಧ್ಯಕ್ಷರು
ಆಲಿ ಮಾಸ್ಟರ್ ಧ್ವಜಾರೋಹಣ ಗೈದು
ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆ
ಯ ಮಹತ್ವವನ್ನು ತಿಳಿಸಿ ಎಲ್ಲರಿಗೂ
ಶುಭಾಶಯ ಕೋರಿದರು.
ಅಲ್ಲದೆ
ಬಿ.ಆರ್.ಸಿ
ಯ ಬಿ.ಪಿ.ಒ
ಆದ ವಿಜಯ ಕುಮಾರ್ ಸರ್ ಸ್ವಾತಂತ್ರ್ಯ
ದಿನಾಚರಣೆ ಯ ಮಹತ್ವವನ್ನು ತಿಳಿಸಿ
,ಮಕ್ಕಳಿಗೆ
ಒಂದು ಹಾಡನ್ನು ಹಾಡಿದರು.ಮತ್ತು
ಪಿ.ಟಿ.ಎ
ಪ್ರೆಸಿಡೆಂಟ್, ,ಶಾಲಾ
ಮುಖ್ಯೋಪಾಧ್ಯಾಯರು ಶುಭಾಶಂಸನೆ
ಕೋರಿದರು.ಅಲ್ಲದೆ
ಅಧ್ಯಾಪಕರು,ರಕ್ಷಕರು,.ಎಮ್.ಪಿ.
ಟಿ ಎ ಪ್ರೆಸಿಡೆಂಟ್
,ಕುಟುಂಬಶ್ರೀ
ಸದಸ್ಯರು ಉಪಸ್ಥಿತರಿದ್ದರು.
ನಂತರ
ಸ್ಪರ್ಧೆಗಳಲ್ಲಿ ವಿಜೇತರಾದ
ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕೊನೆಯಲ್ಲಿ
ಶಾಲಾ ವತಿಯಿಂದ,ಪಂಚಾಯತ್
ನಿಂದ,ಹಳೆ
ವಿದ್ಯಾರ್ಥಿ ವಿದ್ಯಾರ್ಥಿನಿ
ಯಾದ ಗುರುರಾಜ್ ಕೊಂಡೆವೂರ್ ಮತ್ತು
ಸ್ನೇಹ ಶಶಿಧರ್ ಪೂಂಜ ವತಿಯಿಂದ,ಕುಟುಂಬಶ್ರೀ
ವತಿಯಿಂದಲೂ ಸಿಹಿತಿಂಡಿ
ಹಂಚಲಾಯಿತು.ಅಲ್ಲದೆ
ಅಂಗನವಾಡಿಯ ಪರವಾಗಿ ಪಾಯಸ
ವಿತರಿಸಲಾಯಿತು. ನಂತರ
ರೇಣುಕಾ ಟೀಚರ್ ಎಲ್ಲರಿಗೂ
ಧನ್ಯವಾದವನ್ನರ್ಪಿಸಿದರು.