ಹಿರೋಶಿಮ
ದಿನ
ತಾ
-6/8/2015
ಗುರುವಾರದಂದು
ಹಿರೋಶಿಮ ದಿನ.ಆದಿನ
ಬೆಳಿಗ್ಗೆ ಶಾಲೆಯಲ್ಲಿ ಅಸೆಂಬ್ಲಿ
ನಡೆಸಲಾಯಿತು.ಹಿರೋಶಿಮದಲ್ಲಿ
ನಡೆದ ಯುದ್ಧದ ಕುರಿತಾಗಿ ಶಾಲಾ
ಮುಖ್ಯೋಪಾಧ್ಯಾಯ ರಾದ ರವೀಂದ್ರ
ಮಾಸ್ಟರ್ ಲಘು ವಿವರಣೆಯನ್ನು
ನೀಡಿದರು.ಅಲ್ಲದೆ
ಶಾಲಾ ಅಧ್ಯಾಪಕ ರಾದ ಸುರೇಶ್
ಮಾಸ್ಟರ್ ಕೂಡಾ ಮಕ್ಕಳಿಗೆ ಆ ದಿನದ
ಪ್ರತ್ಯೇಕತೆ ಮತ್ತು ಹಿರೋಶಿಮ
ಯುದ್ಧದಲ್ಲಿ ಹಾಕಿದ ಅಣುಬಾಂಬಿನ
ದುರಂತದಿಂದ ರೋಗಕ್ಕೆ ಬಲಿಯಾದ
ಒಂದು ಪುಟ್ಟ ಬಾಲಕಿ,ಆಕೆ
ರೋಗದಿಂದ ಮುಕ್ತಿ ಹೊಂದಿ ತನ್ನ
ಜೀವವನ್ನು ರಕ್ಷಿಸಲು ಕಾಗದದಲ್ಲಿ
1000
ಕೊಕ್ಕುಗಳನ್ನು
ನಿರ್ಮಿಸಲು ಪ್ರಯತ್ನಿಸಿದಳು.ಆದರೆ
ಅವಳು ಅದು ಸಫಲವಾಗುವ ಮೊದಲೇ
ಸ್ವರ್ಗಸ್ತಳಾದಳು.ನಂತರ
ಅವಳ ಸ್ನೇಹಿತರು ಕೊಕ್ಕನ್ನು
ನಿರ್ಮಿಸಿ ಅವಳ ಶವ ಕುಟೀರಕ್ಕೆ
ಹಾಕಿದರು.ಎ೦ದು
ಆಕೆಯ ಬಗ್ಗೆ ವಿವರಣೆ ನೀಡಿ ಅಂತಹ
ಕೊಕ್ಕನ್ನು ಮಾಡಿ ತೋರಿಸಿದರು.
ಅಸೆಂಬ್ಲಿಯ
ನಂತರ ಯುದ್ಧ ವಿರೋಧಿ ಘೋಷಣಾ
ಮೆರವಣಿಗೆ ನಡೆಯಿತು.ಮಕ್ಕಳು
"ಬೇಡ,ಬೇಡ
ಯುದ್ಧ ಬೇಡ,ಬೇಕು
ಬೇಕು ಶಾಂತಿ ಬೇಕು.''
''ಯುದ್ಧಾ
ನಂತರದ ಗೋಳು,
ಭೂಮಿಯೆಲ್ಲಾ
ಬೋಳು ಬೋಳು.”
“ಲೋಕ
ಶಾಂತಿಯೇ ನಮ್ಮೆಲ್ಲರ ಗುರಿಯಾಗಿರಲಿ,ಯುದ್ಧದ
ಮನೋಭಾವ ದೂರವಾಗಲಿ.”
ಎ೦ಬ
ಘೋಷಣೆಯನ್ನು ಕೂಗುತ್ತಾ ಮೆರವಣಿಗೆಯು
ರಸ್ತೆವರೆಗೆ ಸಾಗಿ ಪುನಃ ಶಾಲೆಗೆ
ಹಿಂತಿರುಗಿತು.ಇದರಿಂದಾಗಿ
ಮಕ್ಕಳಿಗೆ "ಯುದ್ಧ
ಮಾಡ ಬಾರದು.ಎಲ್ಲರೂ
ಒಂದಾಗಿ ಶಾಂತಿ ,ಸಮಾಧಾನ
ಏಕತೆಯಿಂದ ಬಾಳಬೇಕು"
ಎ೦ಬ
ಮಾಹಿತಿ ದೊರೆಯಿತು.





No comments:
Post a Comment